ಹೆಚ್.ಪಿ.ಆರ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ರಾವ್, ಪ್ರಸಾದ್ ಚೌಧರಿ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ ‘ಖುಷಿಖುಷಿಯಾಗಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಗೋಲ್ಡನ್ಸ್ಟಾರ್ ಗಣೇಶ್ ಅವರು ಅಭಿನಯಿಸಿದ್ದಾರೆ. ಅಮೂಲ್ಯ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಂದಿನಿ ರೈ, ಸಾಧುಕೋಕಿಲ, ಸಿಲ್ಲಿಲಲ್ಲಿ ಆನಂದ್, ಅಚ್ಯುತಕುಮಾರ್, ಸಂಗೀತಾ ಮುಂತಾದವರಿದ್ದಾರೆ.
ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶಿವು ಅವರ ಕಲಾ ನಿರ್ದೇಶನವಿದೆ.